Monday, 28 April 2014


ಹಸಿವ ಉಣಬಡಿಸುವೆ
ನಿದಿರೆ ಧಾರೆ ಎರೆವೆ
ಅರಿವೆಂಬ ಆಶಿರ್ವಾದ
ಅರಸಿ ನಾ ಬಂದಿರುವೆ
ಹರಸೊ ಎನ್ನ ಹರನೆ
ಜನ ಜಾನುವಾರುಗಳ
ನಿತ್ಯ ಸಲಹುವ ಸತ್ಯ
ದಾಸೋಹಿ ನೀ ಜಗದೀಶ
ಆದ್ಯಾತ್ಮದ ಎಣ್ಣೆ ಎರೆಯಲು
ಜಗವನೆ ಬೆಳೆಗಿದ
ಜಗದೀಪ ನೀ ಜಗದೀಶ
ಜಗವೆಲ್ಲ ಜಾಗರಣೆ
ಎಲ್ಲೆಲ್ಲೂ ನಿನ್ನ ಸ್ಮರಣೆ
ಹಸಿವ ಸುಳಿವೇ ಇಲ್ಲ
ನಿದಿರೆ ಮಂಪರು ಇಲ್ಲ
ಹರನಾಮ ಬದುಕ ಗೆದ್ದಿತಲ್ಲ

No comments: