Monday, 28 April 2014

ಭಾರತ ಕೋಟೆಯ ಕಾಯುವ
ಯೋಧರ ತಲೆ ಕಡಿದರೂ
ಕದಲದೆ ಕೂರುವ ಮಂತ್ರಿವರ್ಯರು
ಕ್ರಿಕೆಟ್ ಎಂಬ ಅರ್ಥಹೀನ ರಣರಂಗಕೆ
ಮಣೆಹಾಕುವ ಮಾಧ್ಯಮಗಳು,
ಸತ್ತರೊಂದು ಸುದ್ದಿಯಷ್ಟೆ ಸುಮ್ಮನಾಗುವರು
ಮಣ್ಣ ಮಹಿಮೆಯನರಿಯದ ಮಕ್ಕಳೇಕೆ ದೇಶಕೆ?
ದೇಶದ ನೆತ್ತಿಯಲ್ಲಿ ಹರಿದ ನೆತ್ತರು
ಸುಡುತಿದೆ ಭಾರತಾಂಬೆಯ ಒಡಲ
ಒಗ್ಗಟ್ಟು ಒಡೆದ ಒಡಲ ಕುಡಿಗಳ
ಕಂಡು ಕಣ್ಣೀರಿಡುತಿಹಳು ಭಾರತಿ
ಮಣ್ಣಿಗಾಗಿ ಮಡಿದವರ ಶ್ರಮವ
ಮಾಡದಿರಿ ಮಣ್ಣುಪಾಲು
//ನಂದಿನಿ//

No comments: