Friday, 20 March 2015

ಅಕ್ಷಯ ಆಗೋದೆಲ್ಲಾ ಅದೃಷ್ಟನೇ  ಅಲ್ಲ ಕೆಲವರ ಪಾಲಿಗೆ ದುಖ:, ಖಿನ್ನತೆ ಅನ್ನೋ ದುರಾದೃಷ್ಟಗಳು  ಅಕ್ಷಯವಾಗುತ್ತಾ ಹೋಗುತ್ತವೆ . ಯಾರೇ ಆಗಲಿ ಜೀವನದಲ್ಲಿ ಗೆಲ್ಲ ಬೇಕಾದರೆ ಮೆದುಳಿನ ಮಾತನ್ನೇ ಕೇಳಬೇಕು , ಮನಸಿನ ಮಾತುಗಳು ನಮ್ಮನ್ನು ಭಾವುಕರನ್ನಾಗಿ ಮಾಡುತ್ತವೆ, ಈ ಭಾವನೆಗಳು ಒಬ್ಬಂಟಿ ಬಂಡೆ  ಮೇಲೆ ಸದಾ  ದಾಳಿ ಇಡುವ ಅಲೆಗಳ ಥರ,  ಬಂಡೆಯಂತ ಬಂಡೆಯನ್ನೇ ಕರಗಿಸುತ್ತವೆ.ಅಂಥ  ಭಾವನೆಯನ್ನು ತೊಳೆದುಹಾಕುವಲ್ಲಿ  ಕಣ್ಣೀರಿನ ಅಲೆಯ ಪ್ರಯತ್ನವೂ ವ್ಯರ್ಥ, ಎಷ್ಟೇ ತೊಳೆದರೂ ಭಾವನೆಗಳು ಬಣ್ಣಗೆಡು ವುದಿಲ್ಲ .ನಿಜವಾದ ಪ್ರೀತಿ ಅನುಭಂದ ಇದ್ದಲ್ಲೆಲ್ಲ ನೆನಪುಗಳ ತಾಕತ್ತು ಜಾಸ್ತಿ , ಆದ್ರೆ ಈ ಕಾಲದ ತಾಕತ್ತು ಇನ್ನು ಜಾಸ್ತಿ , ಅದೆಷ್ಟು ಅಂದ್ರೆ ಮರೆಯುವ ಗೋಜಿಗೆ ಹೋಗದ ಮೂರ್ಖ ಮನಸನ್ನೂ ಅದರಿಂದ ಹೊರಗಡೆ ಎಳೆಯುವಷ್ಟು.ಸತ್ತಾದರೂ ಬದುಕಬೇಕುಎನ್ನೋ ಛಲ ತುಂಬುವಷ್ಟು. ಸೊ ... ಫೈನಲಿ ಏನಾಗಲಿ ಮುಂದೆ ಸಾಗು ನೀ.......

No comments: